ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಸಾರ್ವಜನಿಕ ಆಸ್ಪö್ತರೆಗೆ ಭೇಟಿ ನೀಡಿದ ನ್ಯಾಯಾಧೀಶರು

ಎಚ್‌ಎನ್ ಅಮರಧಾಮಕ್ಕೆ ಮಾಜಿ, ಹಾಲಿ ಶಾಸಕರ ಭೇಟಿ

ಒಕ್ಕೂಟಗಳಲ್ಲಿ ನೇಮಕಾತಿ ವೇಳೆ ರೈತರ ಮಕ್ಕಳಿಗೆ ಆದ್ಯತೆಗೆ ಹೋರಾಟ

June 8, 2025

Ctv News Kannada

Chikkaballapura

ಚಂದನವನದಲ್ಲಿ ಬರ್ತಿದೆ ಮಲೆನಾಡ ಸೊಗಡಿನ ಸಿನಿಮಾ ‘ಕೆರೆಬೇಟೆ’;

1 min read

ಐದು ವರ್ಷಗಳ ವಿರಾಮದ ನಂತರ ನಟ ಗೌರಿ ಶಂಕರ್ ಅವರು ರಾಜ್ ಗುರು ನಿರ್ದೇಶನದ ‘ಕೆರೆಬೇಟೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಚಿತ್ರವನ್ನು ಮಲೆನಾಡಿನ ಸುಂದರವಾದ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ.

ಐದು ವರ್ಷಗಳ ವಿರಾಮದ ನಂತರ ನಟ ಗೌರಿ ಶಂಕರ್ ಅವರು ರಾಜ್ ಗುರು ನಿರ್ದೇಶನದ ‘ಕೆರೆಬೇಟೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಮರಳುತ್ತಿದ್ದಾರೆ. ಚಿತ್ರವನ್ನು ಮಲೆನಾಡಿನ ಸುಂದರವಾದ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಇದುವೇ ಚಿತ್ರವನ್ನು ವಿಭಿನ್ನ ಮತ್ತು ವಿಶೇಷವಾಗಿಸಿದೆ. ಮಲೆನಾಡು ತನ್ನ ಸಾಂಪ್ರದಾಯಿಕ ಮೀನುಗಾರಿಕೆ ಅಭ್ಯಾಸಗಳಿಗೆ ಹೆಸರುವಾಸಿಯಾಗಿದ್ದು, ಇದುವೇ ಚಿತ್ರಕ್ಕೆ ತಿರುವು ನೀಡುತ್ತದೆ.

ಶೀರ್ಷಿಕೆ ಪೋಸ್ಟರ್ ಮೂಲಕ ಚಿತ್ರತಂಡ ಬಹಿರಂಗಪಡಿಸಿದಂತೆ ಸಿನಿಮಾ ಹಳೆಯ ಮೀನುಗಾರಿಕೆ ವಿಧಾನಗಳ ಮೇಲೆ ಕೇಂದ್ರೀಕರಿಸುವ ಗ್ರಾಮೀಣ ಭಾಗದಲ್ಲಿ ನಡೆಯುವ ಕಥಾಹಂದರವನ್ನು ಹೊಂದಿದೆ ಎಂಬುದನ್ನು ತಿಳಿಸುತ್ತದೆ

ಸಂಪೂರ್ಣ ಶಿವಮೊಗ್ಗದಲ್ಲಿ ಚಿತ್ರೀಕರಣಗೊಂಡಿರುವ ಈ ಚಿತ್ರ ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲಿದೆ. ಈ ಯೋಜನೆ ಮೂಲಕ ನಟ ಗೌರಿ ಶಂಕರ್ ಅವರು ಜೈ ಶಂಕರ್ ಪಟೇಲ್ ಜೊತೆಗೂಡಿ ನಿರ್ಮಾಪಕರಾಗಿಯೂ ಜವಾಬ್ದಾರಿಯನ್ನು ಹೊತ್ತಿದ್ದಾರೆ.
ಕೆರೆಬೇಟೆಗೆ ಗಗನ್ ಬದರಿಯಾ ಸಂಗೀತ ನೀಡಿದ್ದಾರೆ.

About The Author

Leave a Reply

Your email address will not be published. Required fields are marked *