ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಸಾರ್ವಜನಿಕ ಆಸ್ಪö್ತರೆಗೆ ಭೇಟಿ ನೀಡಿದ ನ್ಯಾಯಾಧೀಶರು

ಎಚ್‌ಎನ್ ಅಮರಧಾಮಕ್ಕೆ ಮಾಜಿ, ಹಾಲಿ ಶಾಸಕರ ಭೇಟಿ

ಒಕ್ಕೂಟಗಳಲ್ಲಿ ನೇಮಕಾತಿ ವೇಳೆ ರೈತರ ಮಕ್ಕಳಿಗೆ ಆದ್ಯತೆಗೆ ಹೋರಾಟ

June 8, 2025

Ctv News Kannada

Chikkaballapura

ರಾಷ್ಟಿಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಜನ

1 min read

ಅವೈಜ್ಷಾನಿಕ ಕಾಮಗಾರಿ ಖಂಡಿಸಿ ಹೆದ್ದಾರಿ ಬಂದ್
ರಾಷ್ಟಿಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಜನ

ಅವೈಜ್ಷಾನಿಕ ರಸ್ತೆ ಕಾಮಗಾರಿ ಖಂಡಿಸಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ ಘಟನೆ ಇಂದು ಗೌರಿಬಿದನೂರಿನಲ್ಲಿ ನಡೆಯಿತು. ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಗ್ರಾಮದಲ್ಲಿ ರಾಷ್ಟಿಯ ಹೆದ್ದಾರಿ 69ನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ರಸ್ತೆ ಹಾಗೂ ಚರಂಡಿ ಕಾಮಗಾರಿ ಅವೈಜ್ಷಾನಿಕವಾಗಿ ನಿರ್ಮಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿ ಕಾಮಗಾರಿಯಿಂದ ಮನೆಗಳಿಗೆ ನೀರು ಬರುತ್ತಿಲ್ಲ ಎಂದು ಆರೋಪಿಸಿದರು. ಕಾಮಗಾರಿ ವೇಳೆ ನೀರು ಹಾಕದ ಕಾರಣ ದೂಳು ಆವರಿಸುತ್ತಿದೆ ಎಂದು ಜನರು ಪ್ರತಿಭಟನಾಕಾರರು ಅಳಲು ತೋಡಿಕೊಂಡರು.

ರಾಷ್ಟಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು. ರಸ್ತೆ ತಡೆಯಿಂದ ಸಂಚಾರ ಅಸ್ತವ್ಯಸ್ತವಾಗಿತ್ತು. ಗೌರಿಬಿದನೂರು ಚಿಕ್ಕಬಳ್ಳಾಪುರ ಮಾರ್ಗದಲ್ಲಿ ವಾಹನಗಳು ಕಿಲೋಮೀಟರ್ ಗಟ್ಟಲೇ ನಿಂತಲ್ಲೆ ನಿಲ್ಲುವಂತಾಯಿತು. ಹಲವು ಕಾಲ ಸ್ಥಳೀಯರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು.

ಪ್ರತಿಭಟನೆಯಲ್ಲಿ ನವೀನ್, ದದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಲಕ್ಷ್ಮೀನಾರಾಯಣ, ಸುರೇಶ್ ಕುಮಾರ್, ಮಹಮದ್, ಶೋಕತ್, ಅನಿಪ್, ಜಾವಿದ್ ಪಾಶ ಭಾಗವಹಿಸಿದ್ದರು.

 

 

About The Author

Leave a Reply

Your email address will not be published. Required fields are marked *