ಶಿಡ್ಲಘಟ್ಟದ ನ್ಯಾಯಾಲಯದಲ್ಲಿ ಅಂಬೇಡ್ಕರ್ ಜಯಂತಿ

ಬಿಜೆಪಿ ಯಾವತ್ತೂ ಮೀಸಲಾತಿ ವಿರೋಧಿ

ಡಾ. ಯತೀಂದ್ರ ಸಿದ್ದರಾಮಯ್ಯ ಕಾರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು

ಚಿಂತಾಮಣಿಯಲ್ಲಿ ಭೀಕರ ಅಪಘಾತ, ಇಬ್ಬರ ಸಾವು

April 17, 2025

Ctv News Kannada

Chikkaballapura

ನಿರ್ಲಕ್ಷ್ಯ ಮನೋಭಾವದಿಂದ ರೈತರು ಹೊರಬರಬೇಕು ಸರ್ಕಾರಿ ಯೋಜನೆಗಳನ್ನು ಸದ್ಭಳಿಕೆ ಮಾಡಿಕೊಳ್ಳಬೇಕು ಬಾಗೇಪಲ್ಲಿಯಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮನವಿ

1 min read

ನಿರ್ಲಕ್ಷ್ಯ ಮನೋಭಾವದಿಂದ ರೈತರು ಹೊರಬರಬೇಕು  ಸರ್ಕಾರಿ ಯೋಜನೆಗಳನ್ನು ಸದ್ಭಳಿಕೆ ಮಾಡಿಕೊಳ್ಳಬೇಕು  ಬಾಗೇಪಲ್ಲಿಯಲ್ಲಿ ಶಾಸಕ ಎಸ್. ಎನ್.ಸುಬ್ಬಾರೆಡ್ಡಿ ಮನವಿ

ಸರ್ಕಾರ ರೈತರಿಗೆ ನೀಡುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಸಕ್ರಮವಾಗಿ ಹಂಚಿಕೆ ಮಾಡುವಂತೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅಧಿಕಾರಿಗಳಿಗೆ ತಿಳಿಸಿದರು.

ಬಾಗೇಪಲ್ಲಿ ಕೃಷಿ ಇಲಾಖೆ ಆವರಣದಲ್ಲಿ ಕಸಬಾ ಮತ್ತು ಗೂಳೂರು ಹೋಬಳಿಯ 110 ಮಂದಿ ರೈತರಿಗೆ ಪೈಪುಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಸಾಕಷ್ಟು ಗ್ರಾಮೀಣ ರೈತರಿಗೆ ಸರ್ಕಾರ ರಿಯಾಯಿತಿ ದರದಲ್ಲಿ ನೀಡುವ ಯೋಜನೆಗಳು ಗೊತ್ತಿರುವುದಿಲ್ಲ. ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿ, ರೈತರು ಕೃಷಿ ಇಲಾಖೆಗೆ ಭೇಟಿ ನೀಡಿ ಸರ್ಕಾರ ಕೊಡುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆಯಬೇಕು ಎಂದು ಹೇಳಿದರು.

ಅಟಲ್ ಭೂಜಲ್ ಯೋಜನೆಯಡಿ ರೈತರಿಗೆ ಶೇ.90.ರಿಯಾಯಿತಿ ದರದಲ್ಲಿ 17 ಬೆಲೆಯ ಪೈಪುಗಳಿಗೆ ಸರ್ಕಾರ ಸಬ್ಸಿಡಿ ನೀಡುತ್ತದೆ, ರೈತರು 4139 ರೂಪಾಯಿ ಪಾವತಿಸಬೇಕು, ತುಂತುರು ನೀರಾವರಿ ಕೃಷಿ ಚಟುವಟಿಕೆಗಾಗಿ 2.5.ಏಕರೆ ಜಮೀನು ಇರುವ ಎಲ್ಲಾ ರೈತರೂ ಅರ್ಹರಾಗಿರುತ್ತಾರೆ. ಸರ್ಕಾರ ನೀಡುವ ಯೋಜನೆ ಮತ್ತು ಸೌಲಭ್ಯಗಳು ಪಲಾನುಭವಿಗಳು ಸರ್ಕಾರ ಕೊಟ್ಟಿದೆ ಎಂಬ ನಿರ್ಲಕ್ಷ್ಯ ಮಾಡದೆ ಕೃಷಿ ಚಟುವಟಿಕೆಗಾಗಿ ಉಪಯೋಗಿಸುವ ಮೂಲಕ ಸರ್ಕಾರಿ ಯೋಜನೆಗಳು ಸದ್ಭಳಿಕೆ ಮಾಡಿಕೊಳ್ಳುವಂತೆ ತಿಳಿಸಿದರು.

ಈ ಸಂಧರ್ಭದಲ್ಲಿ ಕೃಷಿ ಇಲಾಖೆ ಉಪ ನಿರ್ದೇಶಕಿ ಮಂಜುಳ, ಸಹಾಯಕ ನಿರ್ದೇಶಕ ಆರ್. ಗಂಗಾಧರ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬುರಗಮಡಗು ನರಸಿಂಹಪ್ಪ, ಮುಖಂಡರಾದ ಗುಂಟಿಗಾನಪಲ್ಲಿ ಮಂಜುನಾಥ್ ರೆಡ್ಡಿ,
ತಾಂತ್ರಿಕ ಅಧಿಕಾರಿ ಶಂಕರಯ್ಯ ಹರೀಶ್ ಇದ್ದರು.

About The Author

Leave a Reply

Your email address will not be published. Required fields are marked *